BREAKING NEWSCITY CRIME NEWS

ಪತ್ನಿ ಮಾಡಿದ ಮಸಲತ್ತು ಆಸ್ಪತ್ರೆಯಲ್ಲಿ ಹೊರಬಿತ್ತು!

ಸುದ್ದಿ ಮುಂದುವರೆಯುತ್ತದೆ!

POWER CITYNEWS:DHARAWDಹುಬ್ಬಳ್ಳಿ: ಗಂಡ ಹೆಂಡತಿ ಜಗಳ ಅಂದ್ಮೇಲೆ ಉಂಡ ಮಲ್ಕೊತನಕಾ.. ಅನ್ನೋ ಹಿರಿಯರು ಮಾಡಿದ್ದ ಗಾದೆ ಮಾತು ಇಂದು ಬದಲಾಗಿರುವ ಜೀವನ ಶೈಲಿಯಲ್ಲಿ ಗಂಡ ಹೆಂಡತಿ ಜಗಳ ಕೊಲೆಯಾಗೋತನಕ ಎನ್ನುವಂತಾಯ್ತೆ? ಎನ್ನುವ ಪ್ರಶ್ನೇ ಇಡೀ ಮಾನವ ಸಮಾಜವನ್ನೆ ಕಾಡುತ್ತಿದೆ.

ಇಂತಹದೆ ಘಟನೆ ಇದೀಗ ಸಾಂಪ್ರದಾಯಿಕ ನಾಡು ಧಾರವಾಢದ ನಗರ ಪ್ರದೇಶದಲ್ಲಿ ಜೋರಾಗಿಯೆ ನಡೆಯುತ್ತಿದೆ.ಹಾಗಂತ ಇಲ್ಲಿನ ಕಾನೂನು ಕೂಡ ಕೈ ಕಟ್ಟಿ ಕುಳಿತಿಲ್ಲ. ಆದ್ರೆ ಅಂತಹ ವಿಚಾರಗಳೂ ಬೆಳಕಿಗೆ ಬಂದಾಗ ಸರಿಯಾದ ಕಾರಣ,ಸಬೂಬು ಸಿಕ್ರೆ ಅಪರಾಧಿ ಹೆಣ್ಣಾಗಲಿ ಗಂಡಾಗಲಿ ಕಾನೂನು ಮಾತ್ರ ಇಬ್ಬರಿಗೂ ಒಂದೆ. ಅವಳಿನಗರದಲ್ಲಿ ಹೆಸರಾಂತ ಸ್ವೀಟ್ವ್ ಮಾರ್ಟ್‌ ಮಾಲಿಕನ ಸಂಭಂಧಿಯಾಗಿರುವ ಆಕೆ ಹೆಬ್ಬಳ್ಳಿ ಮೂಲದ ಸುಸಂಸ್ಕೃತ ಮನೆತನದ ಸೊಸೆಯಾಗಿ ಕಾಲಿಟ್ಟಾಗ ಎಲ್ಲವೂ ಸರಿ ಇತ್ತು. ಇವರಿಬ್ಬರ ದಾಂಪತ್ಯಕ್ಕೆ ಒಬ್ಬ ಮಗಳು ಆಕೆ ಇದೀಗ ಒಂಬತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಆದ್ರೆ ಕಳೆದ ಎರಡು ವರ್ಷಗಳಿಂದ ಆಕೆಗೆ ಇದೆ ಧಾರವಾಡದ ಅಕ್ರಮ ಬಡ್ಡಿ ದಂಧೆಕೋರನ ಜೊತೆಗೆ ಅನೈತಿಕ ಸಂಭಂದ ಬೆಳೆದಿದೆ. ಈಕೆಯ ಸೌಂದರ್ಯ ಹಾಗೂ ಹಾಳು ಮನಸ್ಥಿತಿಗೆ ಆತನೂ ಕೂಡ ಗುಲಾಮ.ಇವರಿಬ್ಬರ ಅಕ್ರಮ ಸಂಬಂಧವನ್ನ ಕಣ್ಣಾರೆ ಕಂಡ ಪತಿ ಅಸೂಹೆ ಗೊಂಡು ತನಾಗಾಗುತ್ತಿರುವ ಅನ್ಯಾಯ ತಿಳಿಸಲು ಅವರಿಬ್ಬರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದಾಗಲೆಲ್ಲ ಅತಿ ಚಾಣಾಕ್ಷತನದಿಂದ ಮಾತನಾಡುವ ಆಕೇಯ ಪ್ರಿಯಕರ ಅಕ್ರಮ ಸಂಭಂದದ ಪುಂಗಿದಾಸ ಅಮಾಯಕನಂತೆ ನಟಿಸಿ ಪೊಲೀಸರ ಎದುರು ನಾನಲ್ಲ ಸರ್ ಅವಳೆ ನನ್ನನ್ನ ಬಿಡುತ್ತೀಲ್ಲ.ಎನ್ನುವ ಡೈಲಾಗ್ ಸಾಮಾನ್ಯವಾಗಿದೆ. ಹೀಗೆ ಕಾನೂನಿನ ಕಣ್ಣಿಗೆ ಮಣ್ಣೆರಚಿ ಸ್ಥಳದಿಂದ ಪಾರಾಗುವ ಆತನ ಮಾತು ಕೇಳುವ ಪೊಲೀಸರು ಕೂಡ ಕರಗಿ ಅನೇಕ ಬಾರಿ ಯಾವುದೆ ಕಾನೂನು ಕ್ರಮ ಕೈಗೊಳ್ಳದೆ ಬುದ್ದಿ ಹೇಳಿ ಕಳಿಸಿದ್ದುಂಟು.ಅಲ್ಲಿವರೆಗೆ ಮಾತ್ರ ಗರತಿಯಂತೆ ನಡೆದು ಕೊಳ್ಳುವ ಈಕೆ ಠಾಣೆಯಿಂದ ಮನೆಗೆ ಬರುತ್ತಲೇ ಗಂಡನ ಮೇಲೆ ಮುಗಿಬಿಳುತ್ತ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ಮಾನವಂತ ಪತಿ ಎಲ್ಲಿ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೋ ಎಂದು ಹೆದರಿ ಪುನಃ ಠಾಣೆಯ ಮೆಟ್ಟಲೇರದೆ ಆಕೆಯ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಎನ್ನಲಾಗಿದೆ. ಇ ವಿಷಯ ತಿಳಿದ ಪತ್ನಿ ಮತ್ತು ಆಕೆಯ ಪ್ರೀಯಕರ ಹಾಗೂ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಮಗಳು ಕೂಡ ತಾಯಿಯ ಅಕ್ರಮ ಸಂಬಂಧಕ್ಕೆ ಸಾಥ್ ನೀಡುತ್ತಿದ್ದಾಳಂತೆ.

ಆದ್ರೆ ಈ ಅನೈತಿಕ ಕಳ್ಳ ಜೋಡಿ ಇದೀಗ ಪತಿಯ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಪತ್ನಿ ಹಾಗೂ ಪ್ರೀಯಕರ ಮಾಡಿದ ಕೊಟ್ಯಾಂತರ ರೂ.ಆಸ್ತಿ, ಮನೆ,ಹೊಡೆಯಲು ಮಸಲತ್ತು ಮಾಡಿದ್ದಾರೆ ಎನ್ನುವ ಗುಸು-ಗುಸು ಇದೀಗ ಧಾರವಾಡದ ತುಂಬೆಲ್ಲಾ ಹರಿದಾಡುತ್ತಿದೆ.
ಏತನ್ಮಧ್ಯೆ ಗಂಡ ನಿನ್ನೆ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಮಲಗಿದ್ದರೆ ಆತನನ್ನು ಒಂಟಿಯಾಗಿ ಬಿಟ್ಟ ಹೆಂಡತಿ ಪುಂಗಿದಾಸನ ಮಡಲಲ್ಲಿ ಹಾಯಾಗಿ ಮಲಗಿದ್ದಳಂತೆ? ಹಾಗಾದ್ರೆ ಆಕೆಯ ಪತಿ ಆಸ್ಪತ್ರೆ ಸೇರಲು ಆಕೆಯೇ ನೇರ ಕಾರಣನಾ? ಎನ್ನುವ ಪ್ರಶ್ನೇಗಳು ಮತ್ತಷ್ಟು ಕುತೂಹಲ ಕೆರಳಿಸಿವೆ.ಇದೀಗ ವೈದ್ಯಕೀಯ ಚಿಕಿತ್ಸೆ ಮುಂದುವರೆದಿದೆ ಎನ್ನಲಾಗುತ್ತಿದ್ದು.ಎಂ ಎಲ್ ಸಿ ಪ್ರತಿ ಇದೀಗ ಸಂಭಂದ ಪಟ್ಟ ಠಾಣೆಗೆ ಹೋಗಿರುವ ಸಾಧ್ಯತೆ ಕೂಡ ಇದೆ ಎನ್ನುವ ಮಾಹಿತಿ ಇದೆ.

ಹೀಗೆ ಆಸ್ಪತ್ರೆಯ ಪಾಲಿಗಿರುವ ಪತಿ ತನ್ನ ಪತ್ನಿ,ಮಗಳು ಹಾಗೂ ಪ್ರೀಯಕರನ ಕುರಿತಾಗಿ ತನಗಿರುವ ಆತಂಕವನ್ನ ಅವಳಿನಗರದ ಖಡಕ್ ಪೊಲೀಸ್ ಆಯುಕ್ತರಿಗೂ ಆತನಿಗಿರುವ ಆತಂಕವನ್ನು ಲಿಖಿತವಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಹಾಗಾದ್ರೆ ಆಕೆ ಯಾರು? ಆತ ಯಾರೂ ಎನು ಅಂತ ವಿವರದೊಂದಿಗೆ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ.

Related Articles

Leave a Reply

Your email address will not be published. Required fields are marked *