ಸ್ಥಳೀಯ ಸುದ್ದಿ

ಅಕ್ರಮ ದನಕರಗಳು ಸಾಗಾಟ- ಚಾಲಕ ಅರೆಸ್ಟ್

ಧಾರವಾಡ

ಬೆಳಗಾವಿ ಜಿಲ್ಲೆಯ ಕಿತ್ತೂರು ಸಂತೆಯಲ್ಲಿ ಅಕ್ರಮ ದನಕರುಗಳನ್ನು ತಂದು ರಾಣೆಬೆನ್ನೂರು ತಾಲೂಕಿಗೆ ಸಾಗಾಟ ಮಾಡುವಾಗ ಹಿಂದೂಪರ ಸಂಘಟನೆಗಳು ದಾಳಿ ಮಾಡಿ ದನಕರುಗಳನ್ನು ‌ರಕ್ಷಣೆ ಮಾಡಿದ್ದಾರೆ.

ಧಾರವಾಡ ತಾಲೂಕಿನ
ನರೇಂದ್ರ ಟೋಲ್ ಪ್ಲಾಜಾದ ಸಮೀಪ ಈ ರೀತಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

20 ದನಗಳನ್ನು ಇವತ್ತು ಕಿತ್ತೂರು ಸಂತೆಯಿಂದ ತಂದು, ರಾಣೆಬೆನ್ನೂರಿಗೆ ಸಾಗಾಟ ಮಾಡುತ್ತಿದ್ದೇವೆ ಎಂದು ಡ್ರೈವರ್ ಬಾಯ್ಬಿಟ್ಟಿದ್ದಾನೆ.

ಸದ್ಯ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರಿಗೆ ಚಾಲಕನನ್ನು ಒಪ್ಪಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button