ಸ್ಥಳೀಯ ಸುದ್ದಿ

ಕೆಲಗೇರಿ ಮಠದಲ್ಲಿ ಪೂಜ್ಯರ ಪುಣ್ಯಾರಾಧನೆ ಕಾರ್ಯಕ್ರಮ

ಧಾರವಾಡ

ಶ್ರೀ ಶ್ರೀ ಶ್ರೀ ಹದಿನಾಲ್ಕು ವರ್ಷ ನಿಂತು ತಪಗೈದ ಮಹಾಹಠಯೋಗಿ ನಿಂದರಕಿ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿಗಳ 6 ನೇ ವರ್ಷದ ಪುಣ್ಯಾರಾಧನೆ ಧಾರವಾಡದ / ಕೆಲಗೇರಿ ಯಜ್ಞಾಶ್ರಮದ ಮಠದಲ್ಲಿ ಆಗಸ್ಟ್ 16 ರಂದು ನಡೆಯಿತು.

ಶ್ರೀಗಳ ಗದ್ದುಗೆಗೆ ಪೂಜೆ ಮಾಡಿದ ನಂತರ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.

ಕೆಲಗೇರಿ ಯಜ್ಞಾಶ್ರಮದ ಪೀಠಾಧಿಪತಿ ಆಗಿರುವ ಶ್ರೀ ಶ್ರೀ ಶ್ರೀ ಅಭಿನವ ಸಿದ್ದಲಿಂಗ‌ ಮಹಾಸ್ವಾಮೀಜಿ ಅವರು ದೂರದ ಊರುಗಳಿಂದ ಬಂದಂತಹ ಭಕ್ತಾದಿಗಳಿಗೆ ದರ್ಶನದ ಭಾಗ್ಯ‌ ಕಲ್ಪಿಸಿದ್ರು.

ಮಠದದಲ್ಲಿ ನಿನ್ನೆಯಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹೊರ ರಾಜ್ಯಗಳಿಂದ ಬಂದಂತಹ
ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಠದಲ್ಲಿ‌ ಇಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button