ಸ್ಥಳೀಯ ಸುದ್ದಿ

ಭ್ರಷ್ಟ ಎಇಇ ಅವರ ಧಾರವಾಡದ ಮನೆ ಮೇಲೆ ಎಸಿಬಿ ರೇಡ್

ಧಾರವಾಡ

ಇಂದು ಬೆಳ್ಳಂಬೆಳ್ಳಿಗ್ಗೆ
ಭ್ರಷ್ಟ ಅಧಿಕಾರಿಯ ಮನೆ ಮೇಲೆ ಎಸಿಬಿ ರೇಡ್ ಮುಂದುವರೆದಿದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಕೆ ಎಇಇ ಮನೆ‌ ಮೇಲೆ ಎಸಿಬಿ ದಾಳಿ ಮುಂದುವರಿದಿದ್ದು, ಯಾದಗಿರಿ ಜಿಲ್ಲೆಯ ಎಸಿಬಿ ಅಧಿಕಾರಿಗಳು ಈ ರೇಡ್ ಮಾಡಿದ್ದಾರೆ.

ನಿನ್ನೆಯಷ್ಟೇ ಕಲ್ಬುರ್ಗಿ ಹಾಗೂ ಬೆಂಗಳೂರಿನ ಮನೆ‌ ಮೇಲೆ ರೇಡ್ ಮಾಡಿದ್ದ ಎಸಿಬಿ ಅಧಿಕಾರಿಗಳು.‌

ಧಾರವಾಡದ ಸನ್ಮತಿ‌ನಗರದಲ್ಲಿರುವ ಮನೆ
ಬಸವರಾಜ ಪಾಟೀಲ್ ಎನ್ನುವ ಎಇಇ ಮನೆ ಮೇಲೆ ಈ ರೇಡ್ ನಡೆದಿದೆ.

ಗೋಕಾಕ ತಾಲೂಕಿನ ಕೌಜಲಗಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಇವರಾಗಿದ್ದಾರೆ.

ಯಾದಗಿರಿ ಎಸಿಬಿ ಡಿವೈಎಸ್ಪಿ ಉಮಾಶಂಕರ ನೇತೃತ್ವದಲ್ಲಿ ಈ ರೇಡ್ ನಡೆದಿದ್ದು, ಕೆಲವು
ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button