ಸ್ಥಳೀಯ ಸುದ್ದಿ

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಪ್ರಕಟ

ಬೆಂಗಳೂರು

ರಾಜ್ಯದಲ್ಲಿ ಪತ್ರಿಕಾ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಪತ್ರಕರ್ತರಿಗೆ ಹಾಗೂ ಹಿರಿಯ ಪತ್ರಕರ್ತರಿಗೆ ಸೇರಿದಂತೆ ಮಾಧ್ಯಮದ ಸಂಪಾದಕರಿಗೆ ಕರ್ನಾಟಕ ಮಾಧ್ಯಮ‌ ಅಕಾಡೆಮಿ‌ ಪ್ರಶಸ್ತಿ‌ ಪ್ರಕಟವಾಗಿದೆ.
ಈ ಬಾರಿಯ ವಿಶೇಷ ಪ್ರಶಸ್ತಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ ಅವರಿಗೆ‌ ಸಿಕ್ಕಿದೆ.

ಉಳಿದಂತೆ ವಾಹಿನಿಯ ಹಾಗೂ ಪತ್ರಿಕೆ ರಂಗದ ಹಿರಿಯ ಅನುಭವಿ ಪತ್ರಕರ್ತರಿಗೆ ಈ ಬಾರಿ ಪ್ರಶಸ್ತಿ ಸಿಕ್ಕಿದೆ.

ಒಟ್ಟು 4 ವರ್ಷದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಲಾಗಿದೆ.‌

2021ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಇತ್ತೀಚಿಗೆ ತನಿಖಾ ವರದಿಗಾರಿಕೆಗಾಗಿ ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಜಯಪುರದಲ್ಲಿ ಪ್ರಶಸ್ತಿ ಪಡೆದಿರುವ ಕನ್ನಡದ ಪ್ರಭದ ಯಾದಗಿರಿ ಜಿಲ್ಲೆಯ‌ ಹಿರಿಯ ವರದಿಗಾರ‌ ಆನಂದ ಸೌದಿ ಅವರು ಇದ್ದಾರೆ.

Related Articles

Leave a Reply

Your email address will not be published. Required fields are marked *

Back to top button