ಸ್ಥಳೀಯ ಸುದ್ದಿ

ಲಿಂಗಕ್ಯ ಸ್ವಾಮೀಜಿಗಳ 7 ನೇ ವರ್ಷದ ಪುಣ್ಯಾರಾಧನೆಗೆ ಹೊರ ರಾಜ್ಯದಿಂದ ಬಂದ ಭಕ್ತಗಣ

ಧಾರವಾಡ

14 ವರ್ಷ ಸತತವಾಗಿ ನಿಂತು ‌ತಪೋಗೈದು ಲಿಂಗೈಕ್ಯರಾಗಿರುವ ಧಾರವಾಡ ಕೆಲಗೇರಿ ಬಡಾವಣೆಯ ಮಹಾ ತಪಸ್ವಿ ಶ್ರೀ ನಿಂದರಕಿ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳ 7ನೇ ವರ್ಷದ ಪುಣ್ಯಾರಾಧನೆ ಭಕ್ತ ಸಮೂಹದ ಮಧ್ಯೆ ನಡೆಯಿತು.

ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಮಾತ್ರವಲ್ಲದೇ, ಹೊರರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು.


ಈಗಿನ ಪೀಠಾಧಿಪತಿ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ಪುಣ್ಯಾರಾಧನೆ ಕಾರ್ಯಕ್ರಮಗಳು ನಡೆದವು.
ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಭಕ್ತರಿಂದ ಸಾಮೂಹಿಕ ಪ್ರಾರ್ಥನೆ, ಭಜನೆಗಳು ನಡೆದವು‌.

ಕಾರ್ಯಕ್ರಮದಲ್ಲಿ ಈಗಿನ ಪೀಠಾಧಿಪತಿ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿಯವರ ಪಾದಪೂಜೆಯನ್ನು ಬೆಂಗಳೂರಿನ ನಿವೃತ್ತ ಉದ್ಯೋಗಿಗಳಾದ ರೆಡ್ಡಿ ಹಾಗೂ ವೇಣು ಅವರು ನೆರವೇರಿಸಿದರು.

ಮಹಾರಾಷ್ಟ್ರ, ತೆಲಂಗಾಣ, ಬೆಂಗಳೂರು, ಕಲ್ಬುರ್ಗಿ , ಮಂಗಳೂರು ಸೇರಿದಂತೆ ದೂರದ ಭಕ್ತರು ಆಗಮಿಸಿ, ಗುರುಗಳ ಪಾದಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button