ಸ್ಥಳೀಯ ಸುದ್ದಿ

ಬೇಲೂರು ಕೈಗಾರಿಕೆ ಪ್ರದೇಶದಲ್ಲ ಬೆಂಕಿ‌ ಅವಘಡ

ಧಾರವಾಡ

ಧಾರವಾಡದ ಹೊರವಲಯದಲ್ಲಿರುವ ಬೇಲೂರು ಕೈಗಾರಿಕೆ ಪ್ರದೇಶದಲ್ಲಿ ಬೆಂಕಿ ಅವಘಡವಾಗಿದ್ದು, ಕೊಟ್ಯಾಂತರ ರೂಪಾಯಿ ನಷ್ಟವಾಗಿದೆ.

ಬೇಲೂರು ಕೈಗಾರಿಕೆ ಪ್ರದೇಶದಲ್ಲಿ ರಾಜೇಶ್ ಕಾಟನ್ ಜಿನ್ನಿಂಗ ಮತ್ತು ಪ್ರೇಸಿಂಗನಲ್ಲಿ ಈ ಬೆಂಕಿ ಅವಘಡ ಆಗಿ ಕೋಟ್ಯಾಂತರ ಮೌಲ್ಯದ ಹತ್ತಿ ಹಂಡಿಗೆಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.

ಧಾರವಾಡ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ‌ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಹತ್ತಿ ಕಾಳು ಮತ್ತು ಹಿಂಡಿ ಚೀಲಗಳ ಸಂಗ್ರಹಕ್ಕೆ ಬೆಂಕಿ ಹತ್ತಿದ್ದು ಅಂದಾಜು ಮೂರುವರೆ ಕೋಟಿಗಿಂತ ಹೆಚ್ಚು ನಷ್ಟ ಆಗಿದೆ ಎಂದು ಹೇಳಲಾಗುತ್ತಿದೆ.

ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‌ಈ ಪ್ರಕರಣ ನಡೆದಿದೆ.‌

Related Articles

Leave a Reply

Your email address will not be published. Required fields are marked *

Back to top button