
ಮಹಾರಾಷ್ಟ್ರದ ವಾರ್ಧಾದಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ವರ್ಕಶಾಪ್ ರಾಜ್ಯದ ಪಿ.ಎಚ್.ನೀರಲಕೇರಿ ಭಾಗಿ
ಮುಂಬೈ
ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ ಕಾರ್ಯಾಗಾರ ಹೊರ ರಾಜ್ಯ ಮಹಾರಾಷ್ಟದಲ್ಲಿ ನಡೆಯುತ್ತಿದೆ.
ಮಹಾರಾಷ್ಟ್ರ ರಾಜ್ಯದ ಸೇವಾಗ್ರಾಮ ಆಶ್ರಮದ ವಾರ್ಧಾದಲ್ಲಿ 3 ದಿನಗಳ ವರ್ಕಶಾಪ್ ನಡೆಯುತ್ತಿದೆ.
ಈ ಕಾರ್ಯಕ್ರಮವನ್ನು ಎಐಸಿಸಿ ನಾಯಕರು ಉದ್ಘಾಟನೆ ಮಾಡಿದ್ರು.
ಈ ವರ್ಕಶಾಪನಲ್ಲಿ ರಾಜ್ಯದ 5 ಮಂದಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ವರ್ಕಾಶಾಪನಲ್ಲಿ ಈಗಾಗಲೇ ಕಾಂಗ್ರೆಸ್ ಮುಖಂಡರು ಹಾಗೂ ಎಐಸಿಸಿ ಹಿರಿಯ ನಾಯಕರು ಪಾಲ್ಗೊಂಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ವಕೀಲರಾಗಿ ಕಾನೂನಿನ ಅನುಭವವನ್ನು ಹೊಂದಿರುವ ಪಿ.ಎಚ್.ನೀರಲಕೇರಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಪಕ್ಷದಲ್ಲಿ ನಾಯಕರುಗಳಿಗೆ ಸೂಕ್ತ ಸ್ಥಾನಮಾನ ಕೊಡುವುದು ಸೇರಿದಂತೆ ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಿಂದ ಎಲ್ಲಾ ನಾಯಕರು ಒಗ್ಗಟಾಗಿ ಕೆಲಸ ಮಾಡಿ ಎಂದು ಸೂಚನೆ ಕೊಡಲಾಗಿದೆ.