ಸ್ಥಳೀಯ ಸುದ್ದಿ

ಧಾರವಾಡದಲ್ಲಿ ಬಸವೇಶ್ವರ ಜಯಂತಿ‌ ಆಚರಣೆ

ಧಾರವಾಡ

ಮಹಾಮಾನವತಾವಾದಿ, ಸಮಾನತೆಯ ಹರಿಕಾರ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ 890 ನೇ ಜಯಂತಿಯ ಇಂದು ಧಾರವಾಡದಲ್ಲಿ ಆಚರಣೆ ಮಾಡಲಾಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು, ಅವಳಿ ನಗರದ ನಾಗರೀಕರೊಂದಿಗೆ, ಧಾರವಾಡದ ಕಡಪಾ ಮೈದಾನದಲ್ಲಿರುವ ಶ್ರೀ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಅಶೋಕ ಶೆಟ್ಟರ ರವರು, ಶ್ರೀ ಶೇಖರ ಕವಳಿ ರವರು, ಶ್ರೀ ಶಂಕರ ಪರೀಟ ರವರು, ಶ್ರೀ ಸಂಜಯ ಹೊಸಕೋಟೆ ರವರು, ಶ್ರೀ ವೀರೇಶ ಹಿರೇಮಠ ರವರು, ಶ್ರೀಮತಿ ರಾಜೇಶ್ವರಿ ಅಳಗವಾಡಿ ರವರು, ಹಾಗೂ ಅವಳಿ ನಗರದ ಸಮಸ್ತ ಕುರು ಹಿರಿಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button