ಸ್ಥಳೀಯ ಸುದ್ದಿ

ಕೆರೆಗೆ ಬಾಗಿನ‌ ಅರ್ಪಿಸಿದ ಶಾಸಕರು

ಧಾರವಾಡ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಹೊಸಕೆರೆ ತುಂಬಿ ಕೋಡಿ ಬಿದ್ದಿದೆ.

ಕೆರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲನೆ ನಡೆಸಿದ ಶಾಸಕರು ನಂತರ ಕೆರೆಗೆ ನರೇಂದ್ರ ಮಠದ ಶ್ರೀಗಳಾದ ಶ್ರೀ ಸಂಗಮೇಶ ದೇವರ ದಿವ್ಯಹಸ್ತದಿಂದ ಕೆರೆಗೆ ಬಾಗಿನ ಅರ್ಪಿಸಿದರು.

ಸುಮಾರು 50 ಕ್ಕಿಂತಲೂ ಹೆಚ್ಚು ಎಕರೆ ಪ್ರದೇಶದಲ್ಲಿ ಈ ಕೆರೆ ಇದ್ದು, ಈಗಾಗಲೇ ಮಳೆಯಿಂದ ಪೂರ್ಣ ಭರ್ತಿಯಾಗಿದೆ. ಹೆಚ್ಚಾದ ನೀರು ಹೊರಗಡೆ ಹರಿಯುತ್ತಿದೆ. ಶಾಸಕ ಅಮೃತ ದೇಸಾಯಿ ಅವರು ಈ ಸಂಬಂಧ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ, ಕೆರೆಗೆ ಬಾಗಿನ ಅರ್ಪಿಸಿದರು.

ಈ ಸಂಧರ್ಭದಲ್ಲಿ ಶ್ರೀ ಚನ್ನವೀರಗೌಡ ಪಾಟೀಲ್, ಶ್ರೀ ಗಂಗವ್ವ ನಿರಂಜನ,ಶ್ರೀ ತೀರಕಯ್ಯ ಹಿರೇಮಠ,ಶ್ರೀ ಬಸವರಾಜ ಕೋಮನ್ನವರ, ಶ್ರೀ ನಾಗೇಶ ಹೊಟ್ಟಿಹೊಳಿ, ಶ್ರೀ ಶ್ರೀ ಆತ್ಮಾನಂದ ಹುಂಬೇರಿ,ಶ್ರೀಮತಿ ಸುಶೀಲಾ ಪಾಟೀಲ ,ಶ್ರೀಮತಿ ಮಹಾದೇವಿ ಪೂಜಾರ ,ಶ್ರೀ ರಾಯನಗೌಡ ಪಾಟೀಲ, ಶ್ರೀ ಮಂಜುನಾಥ್ ಇಳಗೇರ, ಶ್ರೀ ಶಂಕರ ಕೋಮಾರದೇಸಾಯಿ,ಶ್ರೀ ಸುರತ ದೇಸಾಯಿ ಸೇರಿದಂತೆ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button